ಪ್ರಸಾದ್ನಲ್ಲಿ ರಣತಂತ್ರ

  • IndiaGlitz, [Saturday,June 21 2014]

ಸುಂದರ ನಟಿ ಹರಿಪ್ರಿಯಾ ಇಂದು ಅನ್ನ-ತಮ್ಮದಿರ ನಾಯಕಿ. ಹೌದು. ಮೊನ್ನೆ ತಾನೇ ಶ್ರೀಮುರಲಿ ನಾಯಕರಾದ ‘ಉಗ್ರo’ ಚಿತ್ರಕ್ಕೆ ಅವರೇ ನಾಯಕಿ. ಈಗ ಶ್ರೀಮುರಲಿ ಅವರ ಅಣ್ಣ ವಿಜಯ ರಾಘವೇಂದ್ರ ಅಭಿನಯದ ಚಿತ್ರಕ್ಕೂ ಹರಿಪ್ರಿಯಾ ಅವರೇ ನಾಯಕಿ. ಚಿತ್ರೀಕರಣ ಸಂಪೂರ್ಣ ಆಗಿ ಸಧ್ಯಕ್ಕೆ ಮಾತುಗಳ ಜೋಡಣೆ ಆಗುತ್ತಿದೆ.

ಆರ್.ಮನೋಜ್ ಕುಮಾರ್ ಯಾದವ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಎಸ್. ರಮೇಶ್ ನಿರ್ಮಾಣದ ರಣತಂತ್ರ ಚಿತ್ರಕ್ಕೆ ಪ್ರಸಾದ್ ರೆಕಾರ್ಡಿಂಗ್ ಸ್ಟುಡಿಯೋವಿನಲ್ಲಿ ಡಬ್ಬಿಂಗ್ ಕಾರ್ಯ ಸಾಗುತ್ತಿದೆ. ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ನಿರ್ದೇಶನ- ಆದಿರಾಂ, ಛಾಯಾಗ್ರಹಣ-ರಾಜೇಶ್ ಯಾದವ್, ಸಂಗೀತ-ಎಂ.ಕಾರ್ತಿಕ್, ಸಂಕಲನ - ಉಗ್ರಂಶೆಟ್ಟಿ, ಕಲೆ-ನಂಜುಂಡಸ್ವಾಮಿ, ಸಾಹಸ-ಮಾಸ್ ಮಾದ, ನೃತ್ಯ-ಕಲೈ-ರಾಧಿಕಾ, ಸಾಹಿತ್ಯ-ನಾಗೇಂದ್ರ ಪ್ರಸಾದ್-ಕೆ.ಕಲ್ಯಾಣ್-ಕವಿರಾಜ್, ಕೋ-ಡೈರೆಕ್ಟರ್-ಭವಾನಿಶಂಕರ್, ನಿರ್ವಹಣೆ - ಹಾರ್ಟ್ಬೀಟ್ ರಾಜು- ಮುರುಗದಾಸ್, ಕ್ಯೂಟ್ ಲವ್ ಹಾಟ್ ಥ್ರಿಲ್ಲರ್ ಕಥಾ ಚಿತ್ರವುಳ್ಳ ಈ ಚಿತ್ರದ ಕೋ-ಪ್ರೊಡ್ಯೂಸರ್ - ಕರ ರಮ್ಮಿರಾಜ್ ತಾರಾಗಣದಲ್ಲಿ ಚಿನ್ನಾರಿ ಮುತ್ತ ವಿಜಯ್, ಹರಿಪ್ರಿಯ, ಸತ್ಯಜಿತ್, ಭಜರಂಗಿ ಮಾದು, ಸಪ್ನೊಂಕಾ ರಾಣಿ ಐಶ್ವರ್ಯ, ಕುರಿ ರಂಗ,ಶಶಿಕಲಾ, ಸೋನಂ,ಭಾರತಿ, ಶೋಬಿನಾ, ಅ೦ಜಲಿ ಮುಂತಾದವರಿದ್ದಾರೆ. ಈಗಾಗಲೇ ಈ ಚಿತ್ರಕ್ಕೆ, ಬೆಂಗಳೂರು, ಮೈಸೂರು, ಗೋವಾ ಮುಂತಾದೆಡೆಗಳಲ್ಲಿ ಚಿತ್ರೀಕರಣ ಸಾಗಿದೆ.